Thursday, September 28, 2006

ಜಾತ್ಯಾತೀತ ವಾಣಿ

ಹಿಂದು ಎಂಬ ಶಬ್ಧ ನಿಮ್ಮ ಕಿವಿಗೆ ಬಿದ್ದೊಡನೆ ನಿಮ್ಮಲ್ಲಿ ದ್ವೇಷದ ಜ್ವಾಲೆ ಭುಗಿಲೇಳಬೇಕು. ಅಲ್ಪಸಂಖ್ಯಾತರಿಗೆ ಅನ್ಯಾಯವಾಯಿತೆಂದು ನಿಮ್ಮ ಬಾಯಿ ಬೊಬ್ಬಿರಿಯಬೇಕು. ನೀವಾಡುತ್ತಿರುವ ಪ್ರತಿ ಮಾತುಗಳಲ್ಲೂ ಗುಜರಾತಿನ ಕೋಮುಗಲಭೆ ಮತ್ತು ಅಯೋಧ್ಯೆಯ ಮಸೀದಿ ಧ್ವಂಸಗಳನ್ನು ಉದಾಹರಿಸಬೇಕು. ಕಾಶ್ಮೀರದ ಹಿಂದುಗಳ ಹತ್ಯೆ, ದೇಶಾದ್ಯಂತ ಬೆಳೆಯುತ್ತಿರುವ ಭಯೋತ್ಪಾದನೆ, ಇತಿಹಾಸದ ಸಾವಿರಾರು ದೇಗುಲ ನಾಶಗಳ ಬಗ್ಗೆ ನೀವು ಚಕಾರವೆತ್ತಕೂಡದು.
ಆಗ ಮಾತ್ರ, ಹಾಗಾದಾಗ ಮಾತ್ರ ನೀನೊಬ್ಬ ನಿಜವಾದ ಜಾತ್ಯಾತೀತ ವ್ಯಾಧಿ!

ಸಮಾನ ನಾಗರಿಕ ಸಂಹಿತೆಯಲ್ಲಿ ನಿಮಗೆ ಕೋಮುವಾದದ ವಾಸನೆ ಬಡಿಯಬೇಕು. ಹಜ್ ಯಾತ್ರೆಗೆ ಮುಸ್ಲಿಮರಿಗೆ ಮಾತ್ರ ನೀಡುವ ಸರಕಾರದ ತೆರಿಗೆ ಹಣ ಜಾತ್ಯಾತೀತತೆಯ ಹಿರಿಮೆಯೆನಿಸಬೇಕು. ಭಯೋತ್ಪಾದಕರು ನಡೆದುವ ಸ್ಫೋಟದ ಸದ್ದಷ್ಟೇ ಅಲ್ಲ, ನೀವಿ ಮಲಗಿರುವಾಗ ಎಲ್ಲಿಂದಲೋ ಕೇಳಿದ ಗೊರಕೆ ಶಬ್ಧಕ್ಕೂ ಭಜರಂಗದಳದವರ ಬಾಂಬ್ ಎಂದು ಪ್ರತಿಕ್ರಯಿಸಬೇಕು.
ಆಗ ಮಾತ್ರ, ಹಾಗಾದಾಗ ಮಾತ್ರ ನೀನೊಬ್ಬ ನಿಜವಾದ ಜಾತ್ಯಾತೀತ ವ್ಯಾಧಿ!

No comments: